Thursday, 24 June 2010

ನೀ ಸಾಗು

ಕಂಬನಿ ಮಳೆಯಿದೆ ಮೃದುವೆ
ತಾಳು ಭಯವೇಕೆ ನಾನಿರುವೆ
ಮುಚ್ಚುವೆ ಸೆರಗಲಿ ಬಂದು
ಬೆಚ್ಚಗಿರುವೆಯಂತೆ ಮುಂದೆ

ಮನುವು ನೊಂದರೆ, ಜಗವು ತಿಳಿವುದು
ದುಡಿದು ಸೋತರೆ, ದೇಹ ಬಲಿವುದು
ವ್ಯಾಪಾರವೆಂದು ತಿಳಿ, ವ್ಯಾಯಾಮವೆಂದು ತಿಳಿ
ಕಷ್ಟ ನಷ್ಟ ಮರೆತುಬಿಡು ನಾಳೆ ನಿನ್ನದೇ

ಕಾಯುತ ನಿಲ್ಲಬೇಡ ನಾ ಬರುವೆನೆಂದು
ನೀ ಯಾರೋ ನಾ ಅವನೆ
ಮಂದೆಯೇ ನೆನೆಯುತಿದೆ, ನೀ ಸಾಗು
ನೀನಡೆದರೆ ನಾನಿರುವೆ, ನಾ ಬರುವೆ ಜೊತೆಗೆ
- ಚಂದಮಾಮ

ಮಂದೆ - ಜನರ ಗುಂಪು