ಬೆಳೆಯಿದೆ ಜಗದೊಳಗೆ ಕೊಯ್ವವರೇ ಇಲ್ಲ
ಹದವಿರುವ ಹೃದಯವಿದೆ ಮೊಗ ನಗಲೆ ಇಲ್ಲ
ಜಗದಾತ್ಮನ ಇಹವು ಸುಖ ಕಾಣಲಿಲ್ಲ
ದೇವನಿರುವನೋ ಏನೋ ಜನ ತಿಳಿಯಲಿಲ್ಲ
ಮಲಗಿರುವ ಮನದ ದೈವನೇಳಬೇಕಲ್ಲ
ಇರುವುದನ ಪ್ರಶ್ನಿಸುವ ಎದೆಗಾರಿಕೆ ಇಲ್ಲ
"ಕೊಲ್ಲಲು ದೇವನನು ಧೈರ್ಯವಿಲ್ಲ"
ತಿಳುವಳಿಕೆ ಇಲ್ಲದ ಬಾಳಾಯಿತಲ್ಲ
ಸ್ವಚ್ಛ ಕನ್ನಡಿ ಒಡೆದು ಹುಚ್ಚಾಯಿತಲ್ಲ
ಕಿಚ್ಚು ಪಾಶ್ಚಿಮವರಡಿ ಧರ್ಮವೇ ಇಲ್ಲ
ಧರಣಿ ಮಂಡಲ ಗೋವು ತಿರುಗಿ ಬರಲಿಲ್ಲ
ಸತ್ತು ಬದುಕಿದ ಬವಣೆ ನಮದಾಗಿತಲ್ಲ
ಬದಲಾವಣೆ ಮತ್ತೆ ತಿರುಗಿ ಬರಲಣ್ಣ
ಭಾವಾಗ್ನಿ ಹುಕ್ಕಿ ತೆರೆಯಲೀ ಕಣ್ಣ
ಕಂಪ ಸೂಸಲಿ ಭೂ ತಾಯ ಮಣ್ಣು
ಪ್ರತಿ ಜೀವಿಗೆ ಸಿಗಲಿ ದೀಪದ ಹಣ್ಣು
"ಕೊಲ್ಲಲು ದೇವನನು ಧೈರ್ಯವಿಲ್ಲ"
ತಿಳುವಳಿಕೆ ಇಲ್ಲದ ಬಾಳಾಯಿತಲ್ಲ
ಸ್ವಚ್ಛ ಕನ್ನಡಿ ಒಡೆದು ಹುಚ್ಚಾಯಿತಲ್ಲ
ಕಿಚ್ಚು ಪಾಶ್ಚಿಮವರಡಿ ಧರ್ಮವೇ ಇಲ್ಲ
ಧರಣಿ ಮಂಡಲ ಗೋವು ತಿರುಗಿ ಬರಲಿಲ್ಲ
ಸತ್ತು ಬದುಕಿದ ಬವಣೆ ನಮದಾಗಿತಲ್ಲ
ಬದಲಾವಣೆ ಮತ್ತೆ ತಿರುಗಿ ಬರಲಣ್ಣ
ಭಾವಾಗ್ನಿ ಹುಕ್ಕಿ ತೆರೆಯಲೀ ಕಣ್ಣ
ಕಂಪ ಸೂಸಲಿ ಭೂ ತಾಯ ಮಣ್ಣು
ಪ್ರತಿ ಜೀವಿಗೆ ಸಿಗಲಿ ದೀಪದ ಹಣ್ಣು