Sunday, 25 December 2011

ಹೊಸ ದಾರಿ, ಹೊಸ ವರ್ಷ

ದಿಟವಾಗಲಿ ಕರೆ 
ಪುಟಿದೇಳಲಿ ಮನ 
ತಡವೇತಕೆ ನಿಲುವು 
ಮನದೇಗುಲ ಬೆಳಕಾಗಲಿ 
ಜಗದೆಲ್ಲಡೆ ಒಲವು 

ಮಡುಕಟ್ಟಿದ ಹಳೆನೀರದು 
ಮಡಿಯಾಗಲಿ ಬೆಂದು 
ತನುವಾಗಲಿ ಹದ ಭೂಮಿಯು 
ಹೊಸ ನೀರಲಿ ಮಿಂದು 

ಅದೇ ಸೂರ್ಯಮ, ಅದೇ ಚಂದ್ರಮ 
ಇದೆ ಭೂಮಿಯು ಸಹಜ 
ಬದಲಾವಣೆ  ಬೇಕಾಗಿದೆ 
ಮನುರಾಜನ ತನುಜ 

ನಿಜದರ್ಥದಿ ಪರಕೀಯವು, ಪರಕಾಯವು 
ಪರದೈವವೆ ಇಲ್ಲ
ಅವ ನಮ್ಮವ, ಜಗ ನಮ್ಮದು 
ಅನಿಕೇತನರೆಲ್ಲ