Wednesday, 10 March 2010

ನುಡಿ ನಡೆ


ನುಡಿಯೇ ವಸಂತ, ನಡೆಯೇ ಅನಂತ
ಗಡಿಯ ಭಯವೇಕೆ ಅದಕೆ
ಮಡಿಯೇ ತಾನಾಗಿ ಗುಡಿಗೆ ಬರುವಾಗ
ಪೂಜಾರಿ ನಿನಗೇಕೆ ಬಯಕೆ

ಮನಸು ಶ್ರೀಗಂಧ, ಹೃದಯ ಹೂವಂದ
ಗಿಡದ ಹೂವೇನು ಚೆಂದ
ಭಕುತಿ ತಾನಾಗಿ ಹರಿದು ಬರುವಾಗ
ತೋರಿಕೆ ಮಾತೇಕೆ ಕಂದ


ನುಡಿಯ ನುಡಿದಂತೆ ನಡೆದು ಬರುವಾಗ
ಜಗದ ಭಯವೇಕೆ ನಿನಗೆ
ದೇವರೆ ಎಂದೆಂದು ಜೊತೆಯಲ್ಲಿ ಇರುವಾಗ
ಎಡವೋ ಕನಸೇಕೆ ಮನಸೆ

No comments: