ನಿಧಿಯಿದೆ ಮನೆಯೊಳಗೆ,
ಅಗೆಯುವವರಿಲ್ಲ.
ಬೆಳಕಿದೆ ಜಗದೊಳಗೆ,
ಕೊಯ್ವವರೇ ಇಲ್ಲ.
ಹದವಿರುವ ಹೃದಯವಿದೆ,
ಮೊಗ ನಗಲೆ ಇಲ್ಲ.
ಜಗದಾತ್ಮನ ಇಹವು,
ಸುಖ ಕಾಣಲಿಲ್ಲ.
ದೇವನಿರುವನೋ ಏನೋ,
ಜನ ತಿಳಿಯಲಿಲ್ಲ.
ಮಲಗಿರುವ ಮನದ ದೈವ,
ನೇಳಬೇಕಲ್ಲ.
ಇರುವುದನ ಪ್ರಶ್ನಿಸುವ,
ಎದೆಗಾರಿಕೆ ಇಲ್ಲ.
ತಿಳುವಳಿಕೆ ಇಲ್ಲದ ಬಾಳು,
ಬಾಳಾಯಿತಲ್ಲ.
ಬದಲಾವಣೆ ಮತ್ತೆ,
ತಿರುಗಿ ಬರಲಣ್ಣ.
ಭಾವಾಗ್ನಿ ಹುಕ್ಕಿ,
ತೆರೆಯಲೀ ಕಣ್ಣ.
ಕಂಪ ಸೂಸಲಿ,
ಭೂ ತಾಯ ಮಣ್ಣು.
ಪ್ರತಿ ಜೀವಿಗೆ,
ಸಿಗಲಿ ದೀಪದ ಹಣ್ಣು.
No comments:
Post a Comment